Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 11 ವರ್ಷಪತ್ರಿಕಾಗೋಷ್ಟಿಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಿಂದ ವೈದ್ಯಕೀಯ ಸೌಲಭ್ಯಗಳ ಮಾಹಿತಿ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ.ಹೇಮಾವತಿ ಹೆಗ್ಗಡೆ ದಂಪತಿಯ ಆಶಯದಂತೆ ಡಿ.ಹರ್ಷೇಂದ್ರ ಕುಮಾ‌ರ್ ಅವರ ಮಾರ್ಗದರ್ಶನದಲ್ಲಿ ಸಾಮಾನ್ಯ ಆಸ್ಪತ್ರೆಯಾಗಿ ಆರಂಭಗೊಂಡ ಉಜಿರೆ ಎಸ್.ಡಿ.ಎಂ.ಆಸ್ಪತ್ರೆ, ಬಳಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆರೋಗ್ಯ ಸೇವೆ ನೀಡುತ್ತಾ ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲಾ ಅರ್ಹತೆಯೊಂದಿಗೆ ಹಂತ ಹಂತವಾಗಿ ಬೆಳೆದು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ” ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಹೇಳಿದರು.
ಅವರು ಜೂ.21ರಂದು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು “ಮಂಗಳೂರಿಗೆ ಅಲೆದಾಡುವ ಹಳ್ಳಿಯ ಜನರ ಆರೋಗ್ಯ ರಕ್ಷಣೆಯ ಕಾಳಜಿಯಿಂದ ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗಾಗಿ ರೂಪಾಯಿ 35 ಕೋಟಿ ವೆಚ್ಚದ ಸುಸಜ್ಜಿತ ಆಸ್ಪತ್ರೆ ಗ್ರಾಮೀಣ ಜನರ ಆರೋಗ್ಯ ರಕ್ಷಣೆ ಗುರಿಯೊಂದಿಗೆ ಆರಂಭಗೊಂಡು ಈಗ ಸುಸಜ್ಜಿತ ಆಸ್ಪತ್ರೆಯಾಗಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು. 20 ತಜ್ಞ ವೈದ್ಯರು, 19 ಸೂಪರ್ ಸ್ಪೆಷಾಲಿಟಿ ವೈದ್ಯರು ಲಭ್ಯವಿದ್ದು 200 ಹಾಸಿಗೆ ವ್ಯವಸ್ಥೆ ಇದ್ದುತೀವ್ರ ನಿಗಾ ಘಟಕ, 6 ಹಾಸಿಗೆಗಳ ನವಜಾತ ಶಿಶುಗಳ ತೀವ್ರ ನಿಗಾ ಘಟಕ, 3 ಹಾಸಿಗೆಗಳ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಗಳು, ಸುಸಜ್ಜಿತ ಹೆರಿಗೆ ಕೊಠಡಿಗಳು, ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟನಕ, ದಯಾಲಿಸಿಸ್ ಸೆಂಟರ್, ಫಾರ್ಮಸಿ, ಸಿಟಿ ಸ್ಕ್ಯಾನಿಂಗ್, ರಕ್ತ ಪ್ರಯೋಗಲಯ, ಎಕ್ಸ್ ರೆ, ಟಿ ಎಂ ಟಿ ಟೆಸ್ಟ್, ಅಂಬುಲೆನ್ಸ್, ಶವ ಸಾಗಾಟ ಮುಕ್ತಿ ವಾಹನ ಹೆಚ್ಚಿನ ಸೇವೆಗಳು ದಿನದ 24 ಗಂಟೆಯೂ ಲಭ್ಯವಿದೆ, ಪೂರಕ ವ್ಯವಸ್ಥೆಗಳಾದ ರಕ್ತ ಸಂಚಯ ನಿಧಿ, ಅಪ್ಟಿಕಲ್ ಮಳಿಗೆ, ಕ್ಯಾಂಟೀನ್, ಶವ ಶೈತ್ಯಾಗಾರ ವ್ಯವಸ್ಥೆ. ವಿವಿಧ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸೆ ಸೌಲಭ್ಯ, ಮಿತದರದಲ್ಲಿ ಹೈಟೆಕ್ ವೈದ್ಯಕೀಯ ಸೇವೆ, ಡಯಾಲಿಸಿಸ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಂಆರ್ ಡಿ,ಕಾರ್ಡಿಕ್ ಅಂಬುಲೆನ್ಸ್, ದಂತ ಚಿಕಿತ್ಸಾಲಯ, ಕಣ್ಣಿನ ಶಸ್ತ್ರ ಚಿಕಿತ್ಸೆ, ಫೂಟ್ ಕೇರ್ ಸೆಂಟರ್, ಅಮ್ಮ ಬರ್ತ್ ಸೆಂಟರ್ ಮೊದಲಾದ ಸೌಲಭ್ಯಗಳೊಂದಿಗೆ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುತ್ತಿದ್ದು, ಕಳೆದ ನಾಲಿನಲ್ಲಿ 2.23 ಕೋಟಿ ರೂ.ಮೌಲ್ಯದ ಔಷಧ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ “ಎಂದರು.
ಪ್ರತಿ ತಿಂಗಳು ಆಸ್ಪತ್ರೆಯಲ್ಲಿ, ಮತ್ತು ವೈದ್ಯರು ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ನಡೆಯುತ್ತಿದ್ದು ಕಳೆದ ಸಾಲಿನಲ್ಲಿ 58 ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 11,752 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ, ಶಿವರಾತ್ರಿ ಸಂದರ್ಭ 28,879 ಮಂದಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ಹಾಗೂ 6 ಲಕ್ಷ ರೂ. ಮೌಲ್ಯದ ಉಚಿತ ಔಷಧವನ್ನು ನೀಡಲಾಗಿದೆ ಎಂದರು. ಆಸ್ಪತ್ರೆಯಲ್ಲಿ ಕೀ ಹೋಲ್ ಸರ್ಜರಿ, ಮೂಲಕ ಕಿಡ್ನಿ ಸ್ಟೋನ್ ಸರ್ಜರಿ, ಗರ್ಭಕೋಶದ ಗೆಡ್ಡೆಯ ಶಸ್ತ್ರಚಿಕಿತ್ಸೆ, ಮಂಡಿ ಬದಲಿ ಜೋಡಣ ಶಸ್ತ್ರ ಚಿಕಿತ್ಸೆ ಪಾದ ಮತ್ತು ಪಾದದ ಮಣಿಗಂಟು, ಬೆನ್ನು ಮೂಳೆ ಸಮಸ್ಯೆ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಸ್ಪತ್ರೆಯು ಎನ್ ಎ ಬಿ ಎಚ್ ಹಾಗೂ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ತ್ರಿರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯಿಂದ ಸುರಕ್ಷತಾ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವುದಕ್ಕೆ ಎಫ್ ಒಜಿಎಸ್ ಐ ಮಾನ್ಯತೆ ಪ್ರಮಾಣ ಪತ್ರ ಪಡೆದಿದೆ “ಎಂದು ಹೇಳಿದರು. ವೈದ್ಯಕೀಯದ ಡಾ. ದೇವೇಂದ್ರ ಕುಮಾರ್ ಮುಖ್ಯ ವೈದ್ಯಾಧಿಕಾರಿ ಸ್ವಾತಿಕ್ ಜೈನ್ ಉಪಸ್ಥಿತರಿದ್ದರು.

ನಾರಾಯಣ ಬಿ. ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಚೈತೇಶ್ ಇಳಂತಿಲ, ಕಾರ್ಯದರ್ಶಿ ಗಣೇಶ್ ಬಿ. ಶಿರ್ಲಾಲ್, ಮೀಡಿಯಾ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶರತ್ ಇವರನ್ನು ಆಸ್ಪತ್ರೆ ವತಿಯಿಂದ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ, ಡಾ. ದೇವೇಂದ್ರ ಕುಮಾರ್, ಡಾ. ಸಾತ್ವಿಕ್ ಜೈನ್ ಗೌರವಿಸಿದರು.

News and Events

Related News