Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕ್ಯಾನ್ಸರ್‍ರೋಗ, ಮೂತ್ರಪಿಂಡರೋಗ ತಜ್ಞರು ಲಭ್ಯ

ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ರೋಗ ತಜ್ಞರಾದ ಡಾ| ಧರ್ಮಕುಮಾರ್ ಕೆ.ಜಿ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಯ ಖ್ಯಾತ ಮೂತ್ರಪಿಂಡರೋಗ ತಜ್ಞರಾದ ಡಾ| ಅಭಯ ನಾರಾಯಣ ಹೆಚ್ ಇವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ.
ಕ್ಯಾನ್ಸರ್‍ರೋಗ ತಜ್ಞರು ಪ್ರತಿ ತಿಂಗಳ 1ನೇ ಮತ್ತು 3ನೇ ಬುಧವಾರ, ಮೂತ್ರಪಿಂಡರೋಗ ತಜ್ಞರು ಪ್ರತಿ ತಿಂಗಳ 2ನೇ ಮತ್ತು 4ನೇ ಶುಕ್ರವಾರ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ
ಈಗಾಗಲೇ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹೃದಯರೋಗ, ಮೂತ್ರರೋಗ, ಸ್ಕ್ಯಾನಿಂಗ್, ಮನೋರೋಗ, ನರರೋಗ, ಚರ್ಮರೋಗ, ಗ್ಯಾಸ್ಟ್ರೋಎಂಟರಲಾಜಿಸ್ಟ್ ತಜ್ಞರು ನಿಗದಿತ ದಿನಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News and Events

Related News