News and Events
ಸರಕಾರಿ ಪ್ರಾಥಮಿಕ ಶಾಲೆ ಮಿತ್ತಬಾಗಿಲು, ಶಾಲೆಯಲ್ಲಿ ಜನವರಿ. 2ರಂದು ವೈದ್ಯಕೀಯ ಜಾಗೃತಿ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಒಕ್ಕೂಟ ಕೂಟ ಸರಕಾರಿ ಪ್ರಾಥಮಿಕ ಶಾಲೆ ಮಿತ್ತಬಾಗಿಲು, ಶಾಲೆಯಲ್ಲಿ ಜನವರಿ. 2ರಂದು ವೈದ್ಯಕೀಯಜಾಗೃತಿ ಶಿಬಿರ ನಡೆಯಿತು.
ಉಜಿರೆ ಎಸ್.ಡಿ.ಎಂಆಸ್ಪತ್ರೆಯ ವೈದ್ಯರಾದಡಾ| ಜ್ಯೋತಿಸ್ ಮರಿಯಾಇವರುಆರೋಗ್ಯ ನಿರ್ವಹಣೆ, ರೋಗಗಳು ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.ರೋಗಿಗಳಆರೈಕೆ ಮತ್ತು ಸಮನ್ವಯಅಧಿಕಾರಿ ಹೇಮಾವತಿ. ಐ ಉಜಿರೆ ಎಸ್.ಡಿ.ಎಂಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು ಮತ್ತು ವೈದ್ಯಕೀಯ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು.ವೈದ್ಯಕೀಯ ಸಂಬಂಧಿತ ವಿವಿಧ ಆರೋಗ್ಯ ಸವಿಮಾ ಸೌಲಭ್ಯಗಳ ಬಗ್ಗೆ ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ ಶೆಟ್ಟಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವಲಯ ಮೇಲ್ವಿಚಾರಕ, ನವೀನ್ ಮುಂಡಾಜೆ ಒಕ್ಕೂಟದ ಅಧ್ಯಕ್ಷರಾದ ಆನಂದ ನಾಯಕ್, ಮಿತ್ತಬಾಗಿಲು ಒಕ್ಕೂಟದ ಮೇಲ್ವಿಚಾರಕಿ ವರಲಕ್ಷ್ಮಿ, ಮಾರ್ಕೆಟಿಂಗ್ಎಕ್ಷಿಕ್ಯೂಟಿವ್ ಸುಮಂತ್ರೈ, ಉಪಸ್ಥಿತರಿದ್ದರು.
